ಐ‌ಎಸ್ ಐಎಸ್

ಅಲ್ಲಿ ನೆತ್ತರಿನ ಸ್ನಾನ
ಮಾಂಸದಂಗಡಿಯೇ ಪುಣ್ಯಸ್ಥಾನ
ಕೈಯಲ್ಲಿ ಕೋವಿ ಕರದ ಆಭರಣ

ವ್ಯತಿರಿಕ್ತ ವ್ಯಾಖ್ಯಾನ
ಧರ್ಮಕ್ಕೆ ನೀಡುವರು
ಕುಲಬಂಧು ಬಾಂಧವರ
ಕೊಚ್ಚಿ ಕೆಡವಿಹರು
ಅವರು ಬೀಜಾಸುರರೇ
ಇಲ್ಲ ರಕ್ತ ಪಿಪಾಸುಗಳೇ
ತಿಗಣಿ, ಸೊಳ್ಳೆ ಉಂಬಳಿಗಿಂತ
ನೇಚ್ಯ ಆದೀಮರೇ

ತಾಯ್ಮೊಲೆಯ ಅಮೃತವ
ಸವಿದಿಲ್ಲ ಖಳರು
ಹರಿಸುತಿಹರೇನದಕೆ ರುಧಿರ ಧಾರೆ?
ನೂರರಂತೆರಡು ಸ್ನಾಯುಗಳ
ಆಕುಂಚಿಸಿ ಪಡೆದ ಮಗನ ಕೊಂದು
ಹೆತ್ತ ಹೊಟ್ಟೆಗೆ ಮಾಂಸ ಉಣಬಡಿಸಿ
ಉಸುರಿದರು ನೀ ಮಗನ ತಿಂದೆ
ಎಂಥಾ ಮಹಾ ತಾಯಿ ಎಂದೆ?
ಧರ್ಮಾಂಧ ರಕ್ಕಸರು
ಏರಿ ಬರುತಿಹರು
ಐ ಎಸ್ ಐ ಎಸ್ ಅಂತಕರು
ಜಗತ್ ವಿಧ್ವಂಷಕರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತೆ
Next post ಶಬರಿ – ೭

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys